Wednesday, November 7, 2012

"ಆನಂದ ನಿಮ್ಮೊಳಗೇ ಇದೆ !!!!"

"ನಾನು ಆನಂದದಿಂದ ಇರಬೇಕು ಎಂಬ ನಿಮ್ಮ ಅಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರದ ಗ್ರಂಥಗಳು ಅಥವಾ ಧರ್ಮದಿಂದ ಆದದ್ದಲ್ಲ.ನಾನು ಆನಂದದಿಂದ ಇರಬೇಕು ಎಂಬುದೇ ಜೀವನದ ಮೂಲಭೂತ ಅಪೇಕ್ಷೆಯಾಗಿದೆ"



ಬ್ರಹ್ಮಾನಂದ ವೆಂದರೆ ಸೃಷ್ಟಿಯೇ ಆನಂದ .ಆಳವಾದ ಆಂತರ್ಯದ ಅಂಶವು ಸೃಷ್ಟಿಯ  ಮೂಲವಾದ ಆನಂದವೇ ಆಗಿದೆ.ನಾವು ಬ್ರಹ್ಮಾನಂದವೆಂದು ಹೇಳುವಾಗ ಸ್ವಯಂ  ಸೃಷ್ಟಿ ಕರ್ತನನ್ನೇ  ಕುರಿತು ಹೇಳುತ್ತಿರುತ್ತೇವೆ.ಅವನೇ ಆನಂದ ಪೂರ್ಣ ಅಥವಾ ಆನಂದ ಭರಿತ.
ಸೃಷ್ಟಿಯ ಮೂಲ ಬೇರೆಲ್ಲೋ ಕುಳಿತಿಲ್ಲ!ನಿಮ್ಮ ಶರೀರವನ್ನೇ ಅವಲೋಕಿಸಿದಾಗ ,ನೀವು ಜನಿಸಿದ ಕ್ಷಣದಿಂದ ಇಲ್ಲಿಯವರೆಗೂ ಅದೆಷ್ಟು ವೃದ್ಧಿಯಾಗಿದೆ!! ಈ ಬೆಳವಣಿಗೆಯು ಬಾಹ್ಯದ ಹಿಗ್ಗಿಸುವಿಕೆಯಿಂದ ಉಂಟಾದುದಲ್ಲ.ಸೃಷ್ಟಿಕರ್ತನು ನಮ್ಮ ಅಂತರ್ಯದಲ್ಲಿ ನಿರಂತರವಾಗಿ ಕ್ರಿಯಾ ಶೀಲನಾಗಿರುವುದರಿಂದ ಇವೆಲ್ಲವೂ ಸಂಭವಿಸುತ್ತಿದೆ.

ಪ್ರಸ್ತುತದಲ್ಲಿ ಸೃಷ್ಟಿಯ ಮೂಲವು ನಿಮ್ಮ ಆಂತರ್ಯದಲ್ಲೇ ಇದೆ.ಅದೇ ಆನಂದ ಮಯ.ನಿಮ್ಮ ಜೀವನದಲ್ಲಿ ಸೃಷ್ಟಿಯ ಈ ಮೂಲಭೂತ ಶಕ್ತಿಯು ಪ್ರಕಾಶಗೊಂಡರೆ,ಅದು ಹೊರ ಹೊಮ್ಮಲು ನೀವು ಅನುವು ಮಾಡಿ ಕೊಟ್ಟರೆ ಆನಂದವಾಗಿರುವುದೊಂದೇ ನಿಮಗಿರುವ ಮಾರ್ಗ.ನಿಮ್ಮ ಆಂತರ್ಯದ ಸಾರದೊಂದಿಗೆ ನೀವು ಏಕತಾನ ಹೊಂದದೆ ಇರುವುದರಿಂದ ಬೇರೆ ಸ್ಥಿತಿಗಳು ನಿಮ್ಮ ಭಾಗವಾಗಿವೆ.ನೀವು ಅನುಭವಿಸುವ ಇನ್ನೆಲ್ಲಾ ರೀತಿಯ ಸ್ಥಿತಿ ಗಳು ನಿಮ್ಮ ಮನಸ್ಸ್ಸು ನಿಮ್ಮ ನಿಯಂತ್ರಣ ಮೀರಿದುದರಿಂದ ಉಂಟಾದವುಗಳಾಗಿವೆ.

ಜೀವನದಲ್ಲಿ ಕ್ಲೇಶಗಳು ಉಂಟಾಗುವುದು ಯಾವುದೇ ಬಾಹ್ಯ ಸನ್ನಿವೇಶ ಗಳಿಂದಾಗಲೀ ,ಯಾವುದೇ ವ್ಯಕ್ತಿಗಳಿಂದಾಗಲೀ ಅಲ್ಲವೆಂಬುದನ್ನು ನಾವು ಅರಿತಿಲ್ಲ.ಬಾಹ್ಯ ಸನ್ನಿವೇಶಗಳು ಶಾರೀರಿಕ ನೋವನ್ನು ಉಂಟು ಮಾಡಬಹುದು.ಆದರೆ ಮಾನಸಿಕ ನರಳಾಟ ಹಾಗೂ ದುಃಖಗಳು ನಿಮ್ಮ ಅಂಕೆ ಮೀರಿದ ಮನಸ್ಸಿನಿಂದಾದದ್ದು.

"ನಾನು ಆನಂದ ದಿಂದ ಇರಬೇಕು" ಎಂಬ ನಿಮ್ಮ ಆಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರ,ಗ್ರಂಥಗಳು,ಅಥವಾ ಧರ್ಮದಿಂದ ಆದದ್ದಲ್ಲ."ನಾನು ಆನಂದದಿಂದ ಇರಬೇಕು "ಎನ್ನುವುದೇ ಜೀವನದ ಅಪೇಕ್ಷೆಯಾಗಿದೆ.ನಿಮ್ಮೊಳಗಿರುವ ಚೈತನ್ಯವು ಆನಂದವನ್ನು ಆಶಿಸುತ್ತದೆ.ಏಕೆಂದರೆ ನಿಮ್ಮೊಳಗಿರುವ ಸೃಷ್ಟಿಯ ಮೂಲ ಭೂತ ಉಗಮದ ಪ್ರಕೃತಿ ಸ್ವಭಾವವೇ ಆನಂದವಾಗಿದೆ.


(ಸದ್ಗುರು ಜಗ್ಗಿ ವಾಸುದೇವ್ ಅವರ "ಅನುದಿನದ ಆನಂದ "ಎಂಬ ಪುಸ್ತಕದಿಂದ ಆಯ್ದ ಭಾಗ)




9 comments:

  1. " ನಾನು" ಹೋದರೆ ಹೋಗಬಹುದು ಎಂದರು ಕನಕದಾಸರು
    ನಾನು ಎನ್ನುವ ಅಹಂ ಕಾಡುವ ತನಕ ಸಗ್ಗ ಸಿಗುವುದಿಲ್ಲ..
    ಹಾಗೆಯೇ ಆನಂದಮಯ ಹೃದಯವನ್ನು ಹೊತ್ತು ತಿರುಗಿದರೆ ಜಗವು ಕೂಡ ಆನಂದಮಯವಾಗುತ್ತದೆ..ಆ" ನಾನು" ಹೋದರೆ ಹೋಗಬಹುದು ಎಂದರು ಕನಕದಾಸರು
    ನಾನು ಎನ್ನುವ ಅಹಂ ಕಾಡುವ ತನಕ ಸಗ್ಗ ಸಿಗುವುದಿಲ್ಲ..
    ಹಾಗೆಯೇ ಆನಂದಮಯ ಹೃದಯವನ್ನು ಹೊತ್ತು ತಿರುಗಿದರೆ ಜಗವು ಕೂಡ ಆನಂದಮಯವಾಗುತ್ತದೆ..ಆನಂದಮಯ ಈ ಜಗ ಹೃದಯ ಎನ್ನುವ ಕವಿ ವಾಣಿಯ ಹಾಗೆ...ಸುಂದರ ಲೇಖನ ಡಾಕ್ಟ್ರೆ.
    ನಂದಮಯ ಈ ಜಗ ಹೃದಯ ಎನ್ನುವ ಕವಿ ವಾಣಿಯ ಹಾಗೆ...ಸುಂದರ ಲೇಖನ ಡಾಕ್ಟ್ರೆ.

    ReplyDelete
  2. ನಮ್ಮೊಳಗೇ ಆನಂದದ ಮೂಲವನ್ನು ಇಟ್ಟುಕೊಂಡು,ಹೊರಗೆ ಅದನ್ನು ಹುಡುಕುತ್ತಿರುವುದೇ ನಮ್ಮೆಲ್ಲಾ ಕಷ್ಟಗಳಿಗೆ,ಮಾನಸಿಕ ನರಳಾಟಕ್ಕೆ ಮೂಲ ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್.ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಕಾಂತ್.ನಮಸ್ಕಾರ.

    ReplyDelete
  3. MANASANNU NIYANTRISI- WAH! ANANDADA MOOLAVE ILLIDE JAGGI VASUDEVARA VICHARA OPPUVANTHAHADU.

    ReplyDelete
  4. ಮನುಷ್ಯನ ಮನಸ್ಸೇ ಸ್ವರ್ಗವನ್ನೂ,ನರಕವನ್ನೂ ನಿರ್ಮಿಸಬಲ್ಲದು.ನಮ್ಮ ಸುಖಕ್ಕೂ,ದುಃಖಕ್ಕೂ ಮನಸೇ ಮೂಲ ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಆನಂದವಾಗಿರುವುದು ದೇಹಕ್ಕೂ ಮನಸ್ಸಿಗೂ ಒಳ್ಳೆಯದು. ಆನಂದವು ಸುಖವನ್ನೇ ಕೊಡುತ್ತದೆ.

    ಈ ನಿಟ್ಟಿನಲ್ಲಿ ನಿಮ್ಮ ಈ ಬರಹವು ನಮಗೆ ಕಣ್ಣು ತೆರೆಸುವುದು.

    ಸದ್ಗುರು ಜಗ್ಗಿ ವಾಸುದೇವ್ ಅವರ "ಅನುದಿನದ ಆನಂದ" ಕೃತಿಯನ್ನು ನಾನು ಹುಡುಕಿ ಓದುತ್ತೇನೆ.

    ReplyDelete
  6. Thank you for sharing sir...

    ati uttama lekhana....

    ReplyDelete
  7. ಯಾವುದೇ ಸಂಶಯವಿಲ್ಲ. ಆನಂದ ನಮ್ಮೊಳಗೇ ಇದೆ.ಅದನ್ನು ಕಂಡುಕೊಳ್ಳುವ ಮಾರ್ಗ ಹಲವರಿಗೆ ತಿಳಿದಿರುವುದಿಲ್ಲ. ಅದಕ್ಕಾಗಿ ಸದ್ಗುರುವಿನ ಮಾರ್ಗದರ್ಶನ ಬೇಕು. ಸೊಗಸಾಗಿದೆ ಡಾಕ್ಟ್ರೇ. ಚಿಕಿತ್ಸೆ ಮುಂದುವರೆಸಿ.

    ReplyDelete
  8. NAMMOLAGINADANNU ARIYADE HORAGDE AANANDAVANNU ARASUTTEVE.ADAKKE 'NINNANNU NEE TILAKO'ENDIDDU.
    DHANYAVAADAGALU NIMMA BARAHAKKE.

    ReplyDelete

Note: Only a member of this blog may post a comment.