Tuesday, August 30, 2011

"ಚೆಲುವೆಗೊಂದು ....ಕಿವಿಮಾತು "

ನನ್ನ ನೆಚ್ಚಿನ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರ ಸಮಗ್ರ ಕವನ ಸಂಕಲನ "ಕ್ಯಾಮರಾ ಕಣ್ಣು"ಓದುತ್ತಿದೇನೆ.
ಒಂದೊಂದು ಕವನವೂ ಅದ್ಭುತ.ಅವರ ಕೆಲವು ಕವನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನಿಸುತ್ತಿದೆ.
ಇಲ್ಲಿದೆ  ಅವರ ಒಂದು ಕವನ "ಕಿವಿ ಮಾತು":


ಮೊದಲೇ  ಚೆಲುವೆ,ಜೊತೆಗೆ ಯೌವನ ,
ನೆಲ  ಕಾಣುವುದಿಲ್ಲ,ನಿಜ.
ಈ  ಒನಪು ವೈಯಾರ ,ಬಿಂಕ ಬಿಗುಮಾನ ,
ಇವೂ  ನಿನಗೆ ಸಹಜ.

ನಿನ್ನ  ಹೆತ್ತವರ ನೋಡಿ ಉತ್ತರಿಸು :
ನಿನ್ನ  ಚೆಲುವು ಸ್ವಂತವೇ?
ಇನ್ನು  ನಿನ್ನ ಈ ಏರು ಯೌವನ ,
ಇದಾದರೂ  ಅನಂತವೇ?

ಬೇರಿನಿಂದ  ಪ್ರತಿ ರೆಂಬೆಯ ತುದಿಗೂ 
ಕಾಣದ  ಅಂತಃ ಸೂತ್ರ;
ಹೊರಗೆ  ಮೆರೆಯುವುದು ಗಮ್ಮನೆ ಅರಳಿದ 
ಬಣ್ಣದ  ಹೂಗಳು ಮಾತ್ರ .

ಸಂಜೆಗೆ  ಮರದಡಿ ಉದುರಿ ಬಿದ್ದಿವೆ 
ರಾಶಿ  ರಾಶಿ ಹೂ ಹೆಣ ;
ದುಂಬಿ  ಚಿಟ್ಟೆಗಳ ಪಾಳಿ ಮುಗಿದಿದೆ ,
ಇನ್ನು ಕೇವಲ  ಇರುವೆ ,ನೊಣ.

ನಿನ್ನ  ಸ್ವಯಾರ್ಜಿತ ವೆಂದರೆ ಇಷ್ಟೇ:
ಹಾರ್ದಿಕ  ಪ್ರೀತಿ,ವಿನಯ.
ಚೆಲುವೆ ,ಒಮ್ಮೆ ನಿನ್ನೊಳಗೆ ನೋಡಿಕೋ ,
ಅವು ನಿನ್ನಲಿ ಇವೆಯ?

Saturday, August 27, 2011

"ನಾನು ಬಾಯಿ ಬಿಡಲೇ ಇಲ್ಲವಲ್ಲಾ ಸ್ವಾಮಿ!!"

1)ಮೆಳ್ಳಗಣ್ಣು ಇರುವ ಪೋಲಿಸಿನವನೊಬ್ಬ ಕುಡಿದು ತೂರಾಡುತ್ತಿದ್ದ ಮೂರು ಮಂದಿಯನ್ನು ಅರೆಸ್ಟ್ ಮಾಡಿದ.
ಪೋಲಿಸಿನವನು, ಮೊದಲನೆಯವನನ್ನು ನೋಡುತ್ತಾ  'ಏನೋ ನಿನ್ನ ಹೆಸರು ?'ಎಂದ. 'ಗುಂಡ ಸ್ವಾಮಿ'ಎಂದು ಎರಡನೆಯವನಿಂದ  ಉತ್ತರ ಬಂತು!ಪೊಲೀಸಪ್ಪನಿಗೆ ಸಿಟ್ಟು ಬಂತು. ಎರಡನೆ ಯವನನ್ನು ದುರುಗುಟ್ಟಿ ನೋಡುತ್ತಾ 
 'ಏಯ್ .....,ನಿನ್ನನ್ನು ಯಾವೋನೋ ಕೇಳಿದವನು?'ಎಂದು  ಗದರಿದ. 'ಅಯ್ಯೋ!  .......ನನ್ನನ್ನು ಯಾಕೆ ಸ್ವಾಮಿ ಗದರುತ್ತೀರಿ!........ನಾನು ಬಾಯಿ ತೆಗೆಯಲೇ ಇಲ್ಲವಲ್ಲಾ 'ಎಂದ ಮೂರನೆಯವನು.

2)ಮುಲ್ಲಾನ ಸ್ನೇಹಿತ ಹೇಳುತ್ತಿದ್ದ "ನನ್ನ ಹೆಂಡತಿ ಮೊದಲು ಪಿಯಾನೋ ನುಡಿಸುತ್ತಿದ್ದಳು.ಆದರೆ ಮಕ್ಕಳಾದ ಮೇಲೆ ಅವಳಿಗೆ ನುಡಿಸಲು ಪುರುಸೋತ್ತಾಗಲಿಲ್ಲ ". ಅದಕ್ಕೆ ಮುಲ್ಲಾ "ಕೆಲವೊಮ್ಮೆ ಮಕ್ಕಳು ಎಂತಹ ನೆಮ್ಮದಿಯನ್ನು ಕೊಡುತ್ತವೆ ಅಲ್ಲವೇ!!"ಎಂದು ಉದ್ಗಾರ ತೆಗೆದ.

3)ಮುಲ್ಲಾನ ಮಿತ್ರ ಹೇಳಿದ "ನನ್ನ ಹೆಂಡತಿ ಮೂರು ತಿಂಗಳಿಂದ ನನ್ನಹತ್ತಿರ ಮಾತನಾಡಿಲ್ಲ.ಆದ್ದರಿಂದ ನಾನು 
  ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದೇನೆ."ಅದಕ್ಕೆಮುಲ್ಲಾನ ಉತ್ತರ ಹೀಗಿತ್ತು; "ನೀನು ಮತ್ತೊಮ್ಮೆ ಆಲೋಚಿಸುವುದು ಒಳ್ಳೆಯದು.ಅಂತಹ ಒಳ್ಳೆಯ ಹೆಂಡತಿ ಎಲ್ಲರಿಗೂ ಸಿಗುವುದಿಲ್ಲ".

Monday, August 22, 2011

"ಮತ್ತದೇ ನಾನು .......,ಮತ್ತದೇ ಜನ !!"

ಧ್ಯಾನದ ಕೋಶದೊಳಹೊಕ್ಕು
ಹೊರಬಂದಾಗ  ...............,
ನಾನೊಂದು  ಬಣ್ಣ ಬಣ್ಣದ
ಚಿಟ್ಟೆಯಾಗಿ.....................,
ನನ್ನ ಸುತ್ತಲ ಜನ
ರಂಗು ರಂಗಿನ ಹೂವುಗಳಾಗಿ ,
ಪ್ರೀತಿ ಸ್ನೇಹಗಳ ಕೊಡಲು
ಕೈ ಬೀಸಿ ಕರೆಯುತ್ತಿದ್ದ ಹಾಗೆ
ಕನಸು....................!
ಕನಸು ಹರಿದಾಗ
ಮತ್ತದೇ ................ನಾನು!!
ಮತ್ತದೇ .................ಜನ!!

Sunday, August 21, 2011

"ಕಾರಿಗೆ ....ವೆನಿಲ್ಲಾ ಐಸ್ ಕ್ರೀಂ .....ಅಲರ್ಜಿಯೇ?"

ಕೆಲವರ ಸಮಸ್ಯೆಗಳು ನಮಗೆ 'ಸಿಲ್ಲಿ'ಎನಿಸಬಹುದು.ಉದಾಹರಣೆಗೆ ರೋಗಿಯೊಬ್ಬ ತನ್ನ ಪಕ್ಕೆ ಹಿಡಿದುಕೊಂಡಿದ್ದನ್ನು  ಆಯುರ್ವೇದದ 'ವಾತ'ಪದವನ್ನು ಇಂಗ್ಲೀಷಿಗೆ ಭಾಷಾಂತರಿಸಿ ನನಗೆ 'ಗ್ಯಾಸ್ಟ್ರಿಕ್ ಟ್ರಬಲ್ ' ಇದೆ ಸರ್ ಎಂದಾಗ ನನಗೆ ಅದು 'ಸಿಲ್ಲಿ' ಎನಿಸಬಹುದು.ಆದರೆ ಪಾಪ ಸಮಸ್ಯೆ ಇರುವವನಿಗೆ ಹೇಗೆ ಹೇಳಿದರೂ ಅದೂ ಒಂದು ಸಮಸ್ಯೆಯೇ ಅಲ್ಲವೇ? ಹಾಗಾಗಿ  ಅವನ ತಪ್ಪನ್ನು ತೋರಿಸಿ ಅವನಿಗೆ ನೋವು ಮಾಡುವ ಗೋಜಿಗೆ ಹೋಗದೆ ಅವನ ಸಮಸ್ಯೆಗೆ ಪರಿಹಾರ ಒದಗಿಸುವತ್ತ ಮಾತ್ರ ಗಮನ ಕೊಡುತ್ತೇನೆ.ಇಂದಿನ 'ಕನ್ನಡ ಪ್ರಭ'ದಲ್ಲಿ ವಿಶ್ವೇಶ್ವರ ಭಟ್ಟರು ಲೇಖನ ಒಂದೊರಲ್ಲಿ ಸ್ವಾಮಿ ಸುಖಭೋದಾನಂದರ ಪುಸ್ತಕದಲ್ಲಿರುವ ಘಟನೆಯೊಂದರ ಬಗ್ಗೆ ಬರೆದಿದ್ದಾರೆ.ಘಟನೆ ಸ್ವಾರಸ್ಯಕರ ಎನಿಸಿದ್ದರಿಂದ ನಿಮ್ಮೊಂದಿಗೆ ಹಂಚಿ ಕೊಳ್ಳುತ್ತಿದ್ದೇನೆ.ಘಟನೆ ಹೀಗಿದೆ:
ಜನರಲ್ ಮೋಟಾರ್ಸ್ ನ ಕಸ್ಟಮರ್ ಕೇರ್ ವಿಭಾಗಕ್ಕೆ ಹೀಗೊಂದು ಪತ್ರ ಬಂತು; 'ಸ್ವಾಮಿ.....,ಕೆಲ ತಿಂಗಳ ಹಿಂದೆ ನಿಮ್ಮ ಕಂಪನಿಯ ಮೋಟಾರ್ ಕಾರ್ ಖರೀದಿಸಿದ್ದೇನೆ.ನನಗೆ ನಿಮ್ಮ  ಕಾರಿನಿಂದ  ವಿಚಿತ್ರವಾದ ಸಮಸ್ಯೆಯೊಂದು ಎದುರಾಗಿದೆ.ಅದೇನೆಂದರೆ ......,ನಿಮ್ಮಕಾರಿನಲ್ಲಿ ನಾನು ಪ್ರತಿದಿನ  ರಾತ್ರಿ ಊಟವಾದ ನಂತರ ಐಸ್ ಕ್ರೀಂ ತರಲು ಹತ್ತಿರದ ಶಾಪಿಂಗ್ ಮಾಲಿಗೆ ಹೋಗುತ್ತೇನೆ.ವೆನಿಲ್ಲಾ ಐಸ್ಕ್ರೀಂ ಕೊಂಡಾಗ ಮಾತ್ರ ನಿಮ್ಮಕಾರ್ ಮತ್ತೆ ಸ್ಟಾರ್ಟ್ಆಗುವುದಿಲ್ಲ!ಬೇರೆ ಯಾವುದೇ ಐಸ್ಕ್ರೀಂ ತಂದರೂ ತಕ್ಷಣ ಸ್ಟಾರ್ಟ್ಆಗುತ್ತೆ.ನಿಮ್ಮಕಾರಿಗೆ ವೆನಿಲ್ಲಾ ಫ್ಲೇವರ್ ಕಂಡರೆ ಅಲರ್ಜಿ ಏಕೆಂದು ಅರ್ಥವಾಗುತ್ತಿಲ್ಲ!ಉದಾಸೀನ ಮಾಡದೆ ತಕ್ಷಣ ನನ್ನಸಮಸ್ಯೆಗೆಪರಿಹಾರಒದಗಿಸಿಕೊಡಿ'.  ಕಸ್ಟಮರ್ ಕೇರ್ ಮ್ಯಾನೇಜರ್ ಗೆ ಸಮಸ್ಯೆಯ ತಲೆ ಬುಡ ಅರ್ಥವಾಗಲಿಲ್ಲ.ಇದು ತೀರ 'ಸಿಲ್ಲಿ'ಸಮಸ್ಯೆಎನಿಸಿದರೂ ಆ ಗ್ರಾಹಕನ ಮನೆಗೆ ಕಂಪನಿಯ ಎಂಜಿನಿಯರ್ ಒಬ್ಬರನ್ನು ಕಳಿಸಿದ.ಗ್ರಾಹಕನ ದೂರು ನೂರಕ್ಕೆ ನೂರರಷ್ಟು ಸತ್ಯವಾಗಿತ್ತು.ವೆನಿಲ್ಲಾ ಐಸ್ಕ್ರೀಂ ಕೊಂಡಾಗ ಮಾತ್ರ ಗಾಡಿ ಸ್ಟಾರ್ಟ್ಆಗಲು ತೊಂದರೆ ಕೊಡುತ್ತಿತ್ತು .ಬಹಳಷ್ಟು ಕೂಡಿ,ಕಳೆದು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಂಡಮೇಲೆ ಇಂಜಿನಿಯರ್ ಗೆ ಸಮಸ್ಯೆ ಏನೆಂದು ಅರ್ಥವಾಯಿತು. ವೆನಿಲ್ಲಾ ಐಸ್ ಕ್ರೀಂಗೆ ಬಹಳ ಬೇಡಿಕೆ ಇದ್ದುದರಿಂದ ಮಾಲ್ ನ ಕೌಂಟರ್ ಬಳಿಯೇ ಅದನ್ನಿಟ್ಟಿದ್ದರು.ಅದರ ಖರೀದಿ ಬೇಗ ಮುಗಿದು  ಹಿಂದಿರುಗಿದಾಗ ಕಾರಿನ ಬಿಸಿ ತಣಿಯದೇ 'ವೇಪರ್ ಲಾಕ್'ಆಗುತ್ತಿತ್ತು.ಕಾರ್ ಬೇಗನೆ ಸ್ಟಾರ್ಟ್ ಆಗುತ್ತಿರಲಿಲ್ಲ.ಬೇರೆ ice cream ತೆಗೆದುಕೊಳ್ಳಲು ಸಾಕಷ್ಟು ಸಮಯ ಆಗುತ್ತಿದ್ದುದರಿಂದ ಕಾರ್ ತಣ್ಣಗಾಗಿ ಸ್ಟಾರ್ಟಿಂಗ್ ಸಮಸ್ಯೆ ಎದುರಾಗುತ್ತಿರಲಿಲ್ಲ!ಸಮಸ್ಯೆಅರ್ಥವಾದ ಮೇಲೆ ಪರಿಹಾರ ಪರಿಹಾರ ಸುಲಭವಾಯಿತು.
  ಅಂದ ಹಾಗೆ ಇನ್ನು ಮುಂದೆ ಯಾರಾದರೂ 'ಸಿಲ್ಲಿ'ಸಮಸ್ಯೆಗಳನ್ನು ಹೇಳಿದಾಗ ,ಉದಾಸೀನ ಮಾಡದೇ ಗಂಭೀರವಾಗಿಯೇ ಪರಿಗಣಿಸೋಣವೇ......?

Saturday, August 13, 2011

"Bliss is a Virtue and Misery is a Sin"

A blissful person is incapable of doing wrong to anybody - to himself or to others. He simply becomes incapable of doing wrong. But the miserable person is bound to do wrong. He may think that he is trying to do something good, but he can't do good. Even though he has the intention of doing good, the outcome is not going to be good. He may think that he loves people, but he will simply dominate in the name of love. He may think that he is a great servant of the people, but he will simply be a politician;through service he will try to dominate.The miserable person is basically incapable of doing good.Hence to me ,virtue can be reduced to one thing,that is blissfulness.And sin can be reduced to one thing,that is misery. MISERY IS SIN AND BLISS IS VIRTUE. My only message is :be cheerful, be blissful,be dancing,be singing and then whatsoever you do is going to be right.
                                                                                                                                 -OSHO

Tuesday, August 9, 2011

"ಹಾಗೇ ಸುಮ್ಮನೇ .......,ಸುಮ್ಮನಿರಬಾರದೇ ?"

ಸಿದ್ಧ ಸಮಾಧಿ ಯೋಗದ ಬಗ್ಗೆ 'ಸುಮ್ಮನಿದ್ದರೆ ಛಳಿಯೂ ನಡುಗುವುದು' ಎನ್ನುವಪುಸ್ತಕ ಬರೆದ ನೆಲ್ಲೀಕೆರೆ ವಿಜಯ್ ಕುಮಾರ್ ಅವರ'ಸುಮ್ಮನಿರಬಾರದೇ'ಎನ್ನುವ ಮತ್ತೊಂದು ಪುಸ್ತಕ ಓದುತ್ತಿದ್ದೆ.ಒಂದು ಹಂತದಲ್ಲಿ 'ನಮ್ಮಲ್ಲಿ ಮುಕ್ಕಾಲುವಾಸಿ ಜನಕ್ಕೆ ,ಸುಮ್ಮನಿರುವುದೂ ಎಷ್ಟೊಂದು ಪ್ರಯಾಸಕರವಲ್ಲವೇ!!?'ಎನಿಸಿತು.'We are not human beings,We are human doings"ಎನ್ನುವ ಎಲ್ಲೋ ಓದಿದ ವಾಕ್ಯ ನೆನಪಾಯಿತು.ತಲೆಯಲ್ಲಿ ಸದಾ ಕಾಲ ಕೋರ್ಟಿನ ವಿಚಾರಣೆ ನಡೆಯುತ್ತಿರುತ್ತದೆ !!ಎಷ್ಟೊಂದು ತರ್ಕ!ಎಷ್ಟೊಂದು ವಿತರ್ಕ!!'ಅವನು ಮಾಡಿದ್ದು ಸರಿ,ಇವಳು ಮಾಡಿದ್ದು ತಪ್ಪು.ಅವನು ಹಾಗೆಹೇಳಬಾರದಿತ್ತು.ಅವಳು ಹಾಗೆಮಾಡಬಾರದಿತ್ತು'.ಮನಸ್ಸು ಸದಾಕಾಲ ಹೀಗೇಕೆ ಕೊತ ಕೊತನೆ ಕುದಿಯುತ್ತಿರುತ್ತದೆ!!?Why should we get so upset about things beyond our control?ನಾವೇನು ಜಗತ್ತಿಗೆ ನ್ಯಾಯಾಧೀಶರೇ!?ಎಲ್ಲಾ ಕೆಲಸ ಬಿಟ್ಟು ,ತೀರ್ಪು ನೀಡುವ ಕೆಲಸಕ್ಕೇಕೆ ಕೈ ಹಾಕಬೇಕು!?ತೀರ್ಪನ್ನು ನೀಡುವ,ಅದನ್ನು ಅನುಷ್ಠಾನಕ್ಕೆ ತರುವ 'ಕಾಣದ ಕೈಯೊಂದು'ಕೆಲಸ ಮಾಡುತ್ತಿದೆ ಎನ್ನುವ ನಂಬಿಕೆಯಷ್ಟೇ ನಮಗೆ ಸಾಲದೇ? ಆಗಿದ್ದನ್ನು ಶಾಂತ ಮನಸ್ಸಿನಿಂದ 'ಅದು ಹೀಗಾಗಿ ಬಿಟ್ಟಿದೆ 'ಎಂದು ಒಪ್ಪಿಕೊಂಡು ,ಆಗಿ ಹೋಗಿದ್ದಕ್ಕೆ ಪರಿಹಾರ ಕೈಗೊಳ್ಳಲು ಕಾರ್ಯ ನಿರತರಾಗುವುದೊಂದೇ ನಾವು ಮಾಡ ಬೇಕಾದ ಕೆಲಸವಲ್ಲವೇ?ಮನಸ್ಸನ್ನು ಶಾಂತ ಸ್ಥಿತಿಯಲ್ಲಿ ಇಡುವುದೇ ನಮ್ಮ ಪ್ರಮುಖ ಕೈಂಕರ್ಯ ವಾಗಬೇಕಲ್ಲವೇ?
ಟೀ ಕುಡಿಯುವಾಗ ಕೈ ಜಾರಿ ಟೀ ಕಪ್ಪು ಸಾಸರಿನ ಸಮೇತ ಕೆಳಗೆ ಬಿದ್ದಿದೆ.ನೆಲದ ಮೇಲೆ ಚೆಲ್ಲಿದ ಟೀ ಜೊತೆಗೆ ಪಿಂಗಾಣಿಯ ಚೂರುಗಳು.ಬಿಸಿ ಬಿಸಿ ಟೀ ಚೆಲ್ಲಿದ್ದಕ್ಕೆ ತಲೆ ಬಿಸಿ ಮಾಡಿಕೊಳ್ಳದೆ ,ಆ ಒಡೆದ ಚೂರುಗಳನ್ನು ತೆಗೆದು ಹಾಕಿ,ಚೆಲ್ಲಿದ ಟೀ ಯನ್ನು ಬಟ್ಟೆಯಿಂದ ಒರೆಸಿ,ಏನೂ ಆಗದ ಹಾಗೆ ಇನ್ನೊಮ್ಮೆ ಟೀ ಮಾಡಿ ಕುಡಿದು ಬಿಡಿ ಅಷ್ಟೇ!!
ಇನ್ನೊಮ್ಮೆ ಟೀ ಮಾಡಲು ಮನೆಯಲ್ಲಿ ಹಾಲಿಲ್ಲವೇ?ಆರಾಮಾಗಿ ಸುಮ್ಮನಿದ್ದುಬಿಡಿ.ಈ ಮನಸ್ಥಿತಿ ಯನ್ನು ಎಲ್ಲಾ ಸಂದರ್ಭಗಳಲ್ಲೂ ಅಳವಡಿಸಿಕೊಳ್ಳಲು  ಸಾಧ್ಯವಿಲ್ಲವೇ?ಸಾಧಿಸುವ ಪ್ರಯತ್ನ ಮಾಡಬಹುದಲ್ಲವೇ?ಇಗೋ ಹೊರಟೆ.ನಾನೂ ನನ್ನ ಸಾಧನೆಯ ಹಾದಿಯಲ್ಲಿ ಪ್ರಯಾಣ ಶುರುಮಾಡುತ್ತೇನೆ.................ನಮಸ್ಕಾರ.