Sunday, July 7, 2013

"ಅಂತರಂಗದಲ್ಲೊಂದು.... ಕುರುಕ್ಷೇತ್ರ !!!!"

ನೆನ್ನೆ ಶನಿವಾರ ದಿನಾಂಕ ೬.೭.೨೦೧೩ ರರ "ಪ್ರಜಾವಾಣಿ"ದಿನಪತ್ರಿಕೆಯ "ಭೂಮಿಕಾ" ಪುರವಣಿಯಲ್ಲಿ ,ಎರಡು ಒಳ್ಳೆಯ ಲೇಖನಗಳಿವೆ.ಮೊದಲನೆಯದು ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ವಿ.ಬಾಲಕೃಷ್ಣನ್ ರವರ "ಆಧುನಿಕ ಕುರುಕ್ಷೇತ್ರ".
ಈ ಲೇಖನದಲ್ಲಿ ಲೇಖಕರು ವ್ಯಕ್ತಿಯ ಮನಸ್ಸಿನಲ್ಲಿ ಪ್ರತಿಕ್ಷಣವೂ ನಡೆಯುವ ಮಾನಸಿಕ ತುಮುಲಗಳ ಬಗ್ಗೆ ಬಹಳ ಸರಳವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಎರಡನೇ ಲೇಖನ ಭರತ್ ಮತ್ತು ಶಾಲನ್ ಸವೂರ್ ರವರ "ಸಂಘರ್ಷ ನಿವಾರಿಸಿ"ಎನ್ನುವ ಲೇಖನ.ಅಚ್ಚರಿ ಎಂದರೆ ಇದೂ ಕೂಡ ಮನಸ್ಸಿನಲ್ಲಿ ನಡೆಯುವ ಆಂತರಿಕ ಸಂಘರ್ಷದ ಬಗ್ಗೆಯೇ !! ಡಬಲ್ ಧಮಾಕ .....!!! ಒಂದೇ ಸಲಕ್ಕೆ ಎರಡು ಸುಂದರ ವ್ಯಕ್ತಿತ್ವ ವಿಕಸನ ಲೇಖನಗಳು!!!! ಎರಡನೇ ಲೇಖನದ ಆಯ್ದ ಕೆಲ ಭಾಗಗಳು ಇಂತಿವೆ.ಪೂರ್ಣ ಮೂಲ ಲೇಖನ ಓದುವುದು ಹೆಚ್ಚು ಲಾಭಕರ ಎಂದು ನನ್ನ ಅನಿಸಿಕೆ.

ಸಾಮಾನ್ಯವಾಗಿ ಯಾವುದೇ ಸಂಘರ್ಷವನ್ನು ನಾವು ಬಾಹ್ಯದಲ್ಲಿ ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ.ನಮಗೂ ಮತ್ತೊಬ್ಬರಿಗೂ ಸಂಘರ್ಷವಾದಾಗ ಎಲ್ಲವನ್ನೂ  ನಮ್ಮ ಅಹಂಕಾರದ ಕನ್ನಡಕದ ಮೂಲಕವೇ ನೋಡುತ್ತೇವೆ .ನಾನೇ ಸರಿ ಎಂದು ವಾದಿಸುತ್ತೇವೆ.ನಮ್ಮದೇ ತಪ್ಪಿದ್ದರೂ ಒಪ್ಪಿ ಕೊಳ್ಳಲು ನಾವು ಸಿದ್ಧರಿರುವುದಿಲ್ಲ.ಅಕಸ್ಮಾತ್ತಾಗಿ ಕ್ಷಮೆ ಕೇಳುವ ಸಂದರ್ಭ ಬಂದರೂ ಕಾಟಾಚಾರಕ್ಕೆ ಒಲ್ಲದ ಮನಸ್ಸಿನಿನಿಂದ ಚುಟುಕಾಗಿ ಕ್ಷಮೆ ಕೇಳುತ್ತೇವೆ! ಮುಖದ ಮೇಲೆ ಒಂದು ಔಪಚಾರಿಕ ನಗು ತಂದು ಕೊಳ್ಳು ತ್ತೇವೆ !!!ಅಂತಿಮವಾಗಿ ಯಾರೂ ಸಂತಸದಿಂದ ಇರುವುದಿಲ್ಲ !!!ಮನಸ್ಸಿನಲ್ಲಿ ಅತೃಪ್ತಿ ಕುದಿಯುತ್ತಿರುತ್ತದೆ.
ಹೃದಯದಲ್ಲಿ ಕಹಿ ಉಳಿದುಬಿಡುತ್ತದೆ.

ನಿಜವಾದ ಸಂಘರ್ಷ ಪ್ರತಿ ವ್ಯಕ್ತಿಯ ಅಂತರಂಗದಲ್ಲಿಯೇ ನಡೆಯುತ್ತಿರುತ್ತದೆ.ಆಗಿದ್ದನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಿರುವುದಿಲ್ಲ!ನಮ್ಮ ಅಹಂಕಾರ ,ತಾನು ಎಣಿಸಿದಂತೆಯೇ ಎಲ್ಲವೂ ನಡೆಯಬೇಕು ಎನ್ನುವ  ಅತೃಪ್ತಿಯನ್ನು ಹುಟ್ಟು ಹಾಕುತ್ತದೆ.ಅಂತರಂಗದ ಅಸಮಾಧಾನ,ಸಿಡುಕು,ನಾನಾ ರೋಗಗಳಿಗೆ ಮೂಲ ಕಾರಣ.ಪ್ರತಿ ವ್ಯಕ್ತಿಯೂ ತನ್ನ ಮನಸ್ಸಿನಿಂದ ಮತ್ತು ಹೃದಯದಿಂದ ಸಿಡುಕನ್ನು ತೆಗೆದು ಹಾಕಿ ಆ ಜಾಗದಲ್ಲಿ ಸದಾ ಶಾಂತಿ ,ಸಮಾಧಾನ,ತಾಳ್ಮೆ ,ನೆಮ್ಮದಿ ನೆಲಸುವಂತೆ ಮಾಡಬೇಕು.ದಿನ ನಿತ್ಯದ ಧ್ಯಾನ ,ಪ್ರಾಣಾಯಾಮ,ಇದಕ್ಕೆ ಸೂಕ್ತ ಮದ್ದು.ಮನಸ್ಸ್ಸಿನ ಆರೋಗ್ಯ ದೇಹದ ಆರೋಗ್ಯಕ್ಕೆ ಮೂಲ ಕಾರಣ.ಹಾಗಾಗಿ ನಿಮ್ಮ ಆಂತರಿಕ ಸಂಘರ್ಶಗಳನ್ನು ಮೊದಲು ನಿವಾರಿಸಿಕೊಂಡು ,ನಿಮ್ಮ ಮನಸ್ಸನ್ನು ಚೆನ್ನಾಗಿ ನೋಡಿಕೊಳ್ಳಿ.ನಮಸ್ಕಾರ.

5 comments:

  1. ಪ್ರತಿಯೊಂದು ಮಾತು ಅಕ್ಷರಶಃ ನಿಜ.. ಕ್ಷಮೆಯಾಚಿಸುವಾಗ ಮನಃ ಪೂರ್ತಿ ಸಮ್ಮತಿ ಇಲ್ಲದಾದಾಗ ಬರಿ ನಾಟಕದ ಮಾತುಗಳಾಗುತ್ತದೆ.. ಸುಂದರ ಲೇಖನ ಡಾಕ್ಟ್ರೆ

    ವಿ.ಬಾಲಕೃಷ್ಣನ್ ರವರ "ಆಧುನಿಕ ಕುರುಕ್ಷೇತ್ರ" link http://www.prajavani.net/article/%E0%B2%86%E0%B2%A7%E0%B3%81%E0%B2%A8%E0%B2%BF%E0%B2%95-%E0%B2%95%E0%B3%81%E0%B2%B0%E0%B3%81%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0



    ReplyDelete
  2. ತುಂಬಾ ಒಳ್ಳೆಯ ಲೇಖನ ಸರ್... ನಮ್ಮ ಮನಸ್ಸನ್ನು ಸ್ತಿಮಿತಕ್ಕೆ ತರುವ ಶಕ್ತಿ ಪ್ರಾಣಾಯಾಮ, ವ್ಯಾಯಾಮಗಳಿಗೆ ಶಕ್ತಿ ಇದೆ ಎಂದಾಯಿತು... ಧನ್ಯವಾದಗಳು ಸರ್

    ReplyDelete
  3. dhanyavaada sir...
    idanna saraLavaagi namage tiLisiddakke...

    ReplyDelete
  4. ಓದಿಸಿದ್ದಕ್ಕಾಗಿ ಧನ್ಯವಾದಗಳು

    ReplyDelete
  5. PRAJAVANIYA LEKHANA CHENNAGIDE. MANASINA VYAVAHARADA SAMATOLANA HEGE MADABEKU ENDU TILISIDDARALLA ADU BAHU MUKHYA.

    ReplyDelete

Note: Only a member of this blog may post a comment.